ಹಿಂಗೊಂದು ವಿಚಾರ!
ಇದೊಂದು ವಿಚಾರ ನಮ್ಮ ನಂಬುಗೆಯನ್ನು ಕುರಿತಾದದ್ದು . ಬೆಳಗೆರೆ ಕೃಷ್ಣಶಾಸ್ತ್ರಿಯವರ ’ ಯೇಗ್ದಾಗೆಲ್ಲಾ ಐತೆ ’ ಪುಸ್ತಕದಲ್ಲಿ ಬರುವ ಮುಕುಂದೂರು ಸ್ವಾಮಿಗಳ ಒಂದು ವಿಚಾರಧಾರೆ ಬಹಳ ಸೊಗಸಾದದ್ದು . ಒಮ್ಮೆ ಮುಕುಂದೂರು ಸ್ವಾಮಿಗಳು ಮತ್ತು ಶಾಸ್ತ್ರಿಗಳು ಬೆಟ್ಟದ ಮೇಲಿನ ದೇವಸ್ಥಾನ ನೋಡಿಕೊಂಡು ರಾತ್ರಿ ಅಲ್ಲಿಯೇ ಉಳಿದಿರುತ್ತಾರೆ . ಆ ಕಡೆ ಬಂದ ಊರಿನವನೊಬ್ಬ ಸ್ವಾಮಿಗಳ ಕಂಡು ಊರಿಗೆ ಬರಬೇಕೆಂದು ಬಲವಂತ ಪಡಿಸುತ್ತಾನೆ . ಮತ್ತೊಮ್ಮೆ ಬರುವೆ ಎಂದು ಹೇಳಿದರು ಬಿಡದೆ ಕರೆಯುತ್ತಿದ್ದವನನ್ನು ಸಮಾಧಾನ ಪಡಿಸುತ್ತಾ , ಆತನೊಂದಿಗೆ : " ಅಲ್ಲೋ ಅಪ್ಪಯ್ಯ ! ಇದ್ದು ಇದ್ದು ಸನ್ಯಾಶೀನ ಬುಧವಾರ , ಅದರಾಗೂ ರಾತ್ರಿವೇಳೇ ಬಾಳಿ ಬದುಕೋ ಮನಿಗೆ ಕರ್ಕೊಂಡು ವೋಗಬೌದೇನೋ ! ಏನೋ ಸ್ವ್ಯಾಮಿಗಳು ಮನೆಗೆ ಬರಲಿ ಅಂತಾನೆ ಒಳ್ಳೇ ಭಕ್ತಿಯಿಂದ ಕರೀತಾನೆ . ಆದ್ರೆ ನಾವು ತಿಳ್ದು ತಿಳ್ದೂ ವೋಗಬೌದೇನಪ...